You are currently viewing BIG NEWS : ಮಂಗಳೂರಿನಲ್ಲಿ ಮತ್ತೊಂದು ಘನ ಘೋರ ದುರಂತ : ಮೂವರು ವಿದ್ಯಾರ್ಥಿಗಳು ಸಾವು..!!

BIG NEWS : ಮಂಗಳೂರಿನಲ್ಲಿ ಮತ್ತೊಂದು ಘನ ಘೋರ ದುರಂತ : ಮೂವರು ವಿದ್ಯಾರ್ಥಿಗಳು ಸಾವು..!!

PV ನ್ಯೂಸ್ ಡೆಸ್ಕ್ :-

BIG NEWS : ಮಂಗಳೂರಿನಲ್ಲಿ ಮತ್ತೊಂದು ಘನ ಘೋರ ದುರಂತ : ಮೂವರು ವಿದ್ಯಾರ್ಥಿಗಳು ಸಾವು..!!

ಮಂಗಳೂರು : ಮಂಗಳೂರಿನಲ್ಲಿ ಮತ್ತೊಂದು ಘನ ಘೋರ ದುರಂತವೊಂದು ನಡೆದುಹೊಗಿದೆ. ನದಿಯೊಂದರಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕಾರ್ಯಕ್ರಮವೊಂದಕ್ಕೆ ಬಂದಿದ್ದ ಕುಪ್ಪಪೆದವು ನಿವಾಸಿ ಲಾರೆನ್ಸ್ (20) ಬೆಳ್ತಂಗಡಿ ತಾಲೂಕಿನ ಪಾರೆಂಗಿ ಗ್ರಾಮದ ಸೂರಜ್ (19) ಬಂಟ್ವಾಳ ಗ್ರಾಮದ ವಗ್ಗದ ಜೈಸನ್ (19) ಎಂಬ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಊಟ ಮುಗಿಸಿ ಮೂಡುಕೋಡಿ ಗ್ರಾಮದ ನಡ್ತಿಕಲ್ಲು ಬರ್ಕಜೆ ಡ್ಯಾಂ ಬಳಿಯ ಎರುಗುಂಡಿ ಬಳಿ ಸ್ನಾನ ಮಾಡಲು ನದಿಗೆ ಇಳಿದಿದ್ದಾರೆ. ಈ ವೇಳೆ ನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಬಿಎಸ್‌ಸಿ ನರ್ಸಿಂಗ್ ಓದುತ್ತಿದ್ದರು ಎಂದು ಮಾಹಿತಿ ಇದೆ. ವೇಣೂರು ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Prajavikshane

Chandru R Bhanapaur

Leave a Reply

error: Content is protected !!