ಮಹಾಶಿವರಾತ್ರಿ ಪ್ರಯುಕ್ತ ಸಾರ್ವಜನಿಕರಿಗೆ ಹಣ್ಣು ಹಂಪಲ ವಿತರಣೆ.. 

ಶಿರಹಟ್ಟಿ : ಪಟ್ಟಣದಲ್ಲಿ ಇಂದು ಜಾತ್ಯತೀತ ಜನತಾ ದಳ ಶಿರಹಟ್ಟಿ ನಗರ ಘಟಕ ವತಿಯಿಂದ ಇಂದು ಓಂ ಶಾಂತಿ ಬ್ರಾಹ್ಮಕುಮಾರಿ ಯವರು ಶಿರಹಟ್ಟಿ ನಗರದಲ್ಲಿ ಹಮ್ಮಿಕೊಂಡಿದ್ದ  ರ‍್ಯಾಲಿಯಲ್ಲಿ  ಪಾಲ್ಗೊಂಡ ಬ್ರಾಹ್ಮಕುಮಾರಿಯರಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಹಣ್ಣು ಹಂಪಲ ಹಂಚಲಾಯಿತು. ಈ ಸಂದರ್ಭಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಂ. ವೈ. ಮುಧೋಳ್ ತಾಲೂಕ ಅಧ್ಯಕ್ಷರು ಶ್ರೀ ಸಿದ್ದಣ್ಣ ಹೊಂಬಾಲಿಮಟ್ಟ್, ನಗರ ಘಟಕ ಅಧ್ಯಕ್ಷರಾದ ಶ್ರೀ ರಾಯೇಸಾಬ್ ಢಾಲಾಯತ, ಗೌರವ ಅಧ್ಯಕ್ಷರು ಶ್ರೀ ಫಕ್ಕಣ್ಣ ತುಳಿ, ಜೆ. ಡಿ. ಎಸ್. ತಾಲೂಕು ಮಹಿಳಾ ಅಧ್ಯಕ್ಷರು ಶ್ರೀಮತಿ ಲಲಿತಾ ಕಲ್ಲಪ್ಪನವರ, ತಾಲೂಕು ಅಲ್ಪಸಂಖ್ಯಾತ ಅಧ್ಯಕ್ಷರು ಎಂ, ಎಚ್, ಕನಕವಾಡ್, ಶ್ರೀ ಶರಣಪ್ಪ ಹೂಗಾರ್, ಶ್ರೀ ವಿನಾಯಕ್ ಪರಬತ್, ಶ್ರೀ ವಿರೇಶ್ ಬಣಗಾರ್, ಶ್ರೀ ಮಾಬೂಸಾಬ್ ಧಾಲಯತ, ಶ್ರೀ ಶಿವು ಪಾಟೀಲ್, ಶ್ರೀ ದೇವಪ್ಪ ವರವಿ, ಶ್ರೀ ಇಸಾಕ್ ಬೈರೆಕಾದಾರ್, ಶ್ರೀ ಬಸು ಕಲ್ಲಪ್ಪನವರ, ಶ್ರೀ ಶಿವು ದಳವಿ ಇನ್ನು ಪಕ್ಷದ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ ವೀರೇಶ್ ಗುಗ್ಗರಿ

Prajavikshane

Chandru R Bhanapaur

Leave a Reply

error: Content is protected !!