BIG NEWS : UPSCಯಲ್ಲಿ 551ನೇ ರ್ಯಾಂಕ್ ಪಡೆದ ಕುರಿಗಾಹಿಯ ಯಶೋಗಾಥೆ..!!
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಯಮಗೆ ಗ್ರಾಮದ ಬೀರದೇವ ಸಿದ್ದಪ್ಪ ಡೋಣೆ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC CSE) 551ನೇ ರ್ಯಾಂಕ್ ಪಡೆದು ದೇಶದಲ್ಲೇ ವಿಶೇಷ ಸಾಧನೆಗೈದಿದ್ದಾರೆ.
ಕುರಿಗಾಹಿಗಳ ಮಗನಾದ ಈ ಯುವಕ ದೇಶವೇ ತಿರುಗಿ ನೋಡುವಂಥ ಸಾಧನೆ ಮಾಡಿದ್ದು, ಸಾಧನೆಗೆ ಬಡತನ ಮತ್ತು ಭಾಷೆ ಅಡ್ಡಿಯಾಗುವುದಿಲ್ಲ ಎಂದು ತೋರಿಸಿದ್ದಾರೆ. ಬೆಳಗಾವಿ ಹೊರವಲಯದಲ್ಲಿ ಕುರಿ ಕಾಯುತ್ತಿದ್ದ ಈ ಸಾಧಕ ತಮ್ಮ ಜೀವನ ಹಾಗೂ ಯುಪಿಎಸ್ಸಿ ಸಾಧನೆಯ ಬಗ್ಗೆ ಈ ವಿಡಿಯೊದಲ್ಲಿ ಮಾತನಾಡಿದ್ದಾರೆ. ಇದೀಗ ವೈರಲ್ ಆಗುತ್ತಿದೆ. ಅದು ಅಲ್ಲದೆ, ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷಾರ್ಥಿಗಳಿಗೆ ಅನೇಕ ಟಿಪ್ಸ್ ಕೂಡ ನೀಡಿದ್ದಾರೆ.