Post Views: 716
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್:
BIG NEWS : ಸ್ಥಳೀಯ ಸಂಸ್ಥೆಗಳ ಚುನಾವಣೆ : ರಾಜ್ಯ ಸರ್ಕಾರಕ್ಕೆ ಮಹತ್ವದ ಎಚ್ಚರಿಕೆ ನೀಡಿದ ಹೈಕೋರ್ಟ್ !: ಈ ಮಾಹಿತಿಗಾಗಿ ಸಂಪೂರ್ಣ ಸುದ್ದಿ ಓದಿ..

ಬೆಂಗಳೂರು : ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ. ರೋಸ್ಟರ್ ಪ್ರಕಟಿಸದೇ ಇದ್ದರೇ, ಹಾಲಿ ರೋಸ್ಟರ್ ನಂತೆ ಚುನಾವಣೆ ನಡೆಸಲು ಆದೇಶಿಸಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಇಂದು ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಮೀಸಲಾತಿ ಪ್ರಕಟಿಸಲು ಕೊನೆಯ ಅವಕಾಶವನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀಡಿದೆ ಎಂದು ಮಹತ್ವದ ಮಾಹಿತಿ ಇದೆ.

ಮೀಸಲಾತಿ ಪ್ರಕಟಿಸದಿದ್ದರೇ, ಹಾಲಿ ರೋಸ್ಟರ್ ಪ್ರಕಾರ ಚುನಾವಣೆ ನಡೆಸಲು ಸೂಚಿಸುವುದಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಎಚ್ಚರಿಕೆ ನೀಡಿದೆ. ಈ ಅರ್ಜಿಯ ವಿಚಾರಣೆಯನ್ನು ಮತ್ತೆ ಸೆಪ್ಟೆಂಬರ್.11ಕ್ಕೆ ಮುಂದೂಡಿಸಲಾಗಿದೆ.