You are currently viewing SPECIAL STORY : ಹತ್ತು ದಿನಗಳಿಂದ ಕುಡಿಯುವ ನೀರಿಗಾಗಿ ಜನರ ಪರದಾಟ..!: ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು..!!

SPECIAL STORY : ಹತ್ತು ದಿನಗಳಿಂದ ಕುಡಿಯುವ ನೀರಿಗಾಗಿ ಜನರ ಪರದಾಟ..!: ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು..!!

PV ವಿಶೇಷ ವರದಿ : 

SPECIAL STORY : ಹತ್ತು ದಿನಗಳಿಂದ ಕುಡಿಯುವ ನೀರಿಗಾಗಿ ಜನರ ಪರದಾಟ..!: ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು..!!

ಕುಕನೂರು : ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ದಿನಗಳಿಂದ ಕುಡಿಯುವ ನೀರು ಪೂರೈಕೆ ಯಾಗದೇ, ಗ್ರಾಮಸ್ಥರೆಲ್ಲ ನೀರಿಗಾಗಿ ಆಹಾಕಾರ ಪಡುತ್ತಿರುವ ಪರಿಸ್ಥಿತಿ ಬನ್ನಿಕೊಪ್ಪ ಗ್ರಾಮದಲ್ಲಿ ನಿರ್ಮಾಣಗೊಂಡಿರುತ್ತದೆ.

 ತಾಲೂಕಿನ ಬನ್ನಿಕೊಪ್ಪ ಗ್ರಾಮದ ಜನತೆ ಹಲವು ವರ್ಷಗಳಿಂದ ಆಗಾಗ ನೀರಿನ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದು, ಕಳೆದ 2024ರ ಅಕ್ಟೋಬರ್ ನಲ್ಲಿಯೂ ಸಹ ನೀರಿಗಾಗಿ ಆಹಾಕಾರ ಉಂಟಾಗಿರವದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲಜೀವನ ಮಿಷನ್ ಜಾರಿಗೆ ಹಲವು ವರ್ಷಗಳೇ ಕಳೆದರೂ ಇಲ್ಲಿನ ಗ್ರಾಮದ ಜನತೆಗೆ ಮಾತ್ರ ನೀರನ್ನ ತಾಪತ್ರಯ ತಪ್ಪುತಿಲ್ಲ.

 ಈ ಗ್ರಾಮವು ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾಗಿದ್ದರು ಸಹ ಇಲ್ಲಿ ಕುಡಿಯುವ ನೀರಿನ ಆಹಾಕಾರ ಮಿತಿ ನೀರಿದ್ದು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ 2 ರಿಂದ 3 ಬೋರ್ವೆಲ್ ಗಳಿದ್ದರೂ ಸಹ ಅದರಿಂದ ದೊರೆಯುವ ನೀರು ಬಳಸಲು ಸಹ ಯೋಗ್ಯವಲ್ಲದ ರೀತಿ ಇದ್ದು ಇನ್ನು ಕುಡಿಯಲು ಸಾಧ್ಯವಿಲ್ಲದಂತಹ ನೀರನ್ನು ಹೊಂದಿರುತ್ತದೆ. ಗ್ರಾಮಕ್ಕೆ ಕುಡಿಯುವ ನೀರಿನ ಮೂಲವಾದ ತುಂಗಭದ್ರ ನದಿ ದಂಡೆಯ ನೇಲೋಗಿಪುರದಿಂದ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಕೆಲವು ಹಳ್ಳಿಗಳಿಗೆ ಪೂರೈಕೆಯಾಗುವ ತುಂಗಭದ್ರ ಪೈಪ್ ಲೈನ್ ಬನ್ನಿಕೊಪ್ಪ ಗ್ರಾಮದ ಮುಖಾಂತರ ಹಾದು ಹೋಗಿದ್ದು ಇದರ ಮುಖಾಂತರ ಸರಬರಾಜಾಗುವ ನೀರು ಹಾಗೂ ಜಲಜೀವನ್ ಮಿಷನ್ ಯೋಜನೆಯಿಂದ ಒದಗುವ ನೀರು ಮಾತ್ರ ಗ್ರಾಮದಲ್ಲಿ ಕುಡಿಯಲು ಯೋಗ್ಯವಾಗಿದ್ದು, ಈ ಎರಡು ಮೂಲಗಳು ಸದ್ಯ ಕಳೆದ ಹತ್ತು ದಿನಗಳಿಂದ ನೀರಿನ ಪೂರೈಕೆ ಮಾಡಲು ಸಾಧ್ಯವಾಗದೇ ಇರುವುದರಿಂದ ಗ್ರಾಮದ ಜನತೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

   ತುಂಗಭದ್ರಾ ನದಿ ನೀರು ಪೂರೈಕೆ ಹಾಗೂ ಜಲ್ ಜೀವನ್ ಮಿಷನ್ ನಿಂದ ಹೊರಗೆ ನೀರಿನ ಪೈಪ್ ಲೈನ್ ಗಳು ಒಡೆದು ಹೋದ ಪರಿಣಾಮ ಈ ಪರಿಸ್ಥಿತಿ ಎದುರಾಗಿದ್ದು ಪೈಪ್ಲೈನ್ ದುರಸ್ತಿ ಕಾರ್ಯ ನಿಧಾನಗತಿಯಲ್ಲಿ ಸಾಗಿರುವುದೇ ಗ್ರಾಮದಲ್ಲಿ ನೀರಿನ ಆಹಾಕಾರ ಉಂಟಾಗಲು ಕಾರಣವಾಗಿದೆ ಎಂದು ಬಲ್ಲಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹೀಗಿದ್ದರೂ ಸಹ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಪೈಪ್ ಲೈನ್ ದುರಸ್ತಿ ಕಾರ್ಯದಲ್ಲಿ ನಿರಾಸಕ್ತಿ ತೋರಿಸುವುದು ಜನರ ಹಿಡಿ ಶಾಪಕ್ಕೆ ಕಾರಣವಾಗಿದೆ.

 ಸದ್ಯ ಗ್ರಾಮ ಪಂಚಾಯಿತಿಯಿಂದ ಗ್ರಾಮಕ್ಕೆ ಎರಡು ಟ್ಯಾಂಕರ್ ಗಳಿಂದ ನಿರಂತರವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಇದರಿಂದ ತಕ್ಕಮಟ್ಟಿಗೆ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಹೇಳಿಕೊಂಡಿರುತ್ತಾರೆ.

 ರಾಜ್ಯದಲ್ಲಿಯೇ ತನ್ನ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಥದತ್ತ ಸಾಗಿಸುತ್ತಿರುವ ಶಾಸಕರಲ್ಲಿ ಮೊದಲಿಗರಾದ ಬಸವರಾಜ ರಾಯರೆಡ್ಡಿ ಪ್ರತಿನಿಧಿಸುತ್ತಿರುವ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬನ್ನಿಕೊಪ್ಪ (ಶಾಸಕರ ಸ್ವಗ್ರಾಮದ ಪಕ್ಕದ ಗ್ರಾಮ) ಗ್ರಾಮದಲ್ಲಿ 10 ದಿನಗಳಿಂದ ಕುಡಿಯುವ ನೀರು ಪೂರೈಕೆ ಆಗದೇ ಇರುವುದು ವಿಪರ್ಯಾಸದ ಸಂಗತಿಯಾಗಿದ್ದು, ಅಧಿಕಾರಿಗಳ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ.

ಇನ್ನು ಮುಂದಾದರೂ ಈ ಕಡೆ ಗಮನಹರಿಸಿ ಶೀಘ್ರದಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡುತ್ತಾರೆಯೇ? ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

Leave a Reply

error: Content is protected !!