ಮುದಗಲ್ಲ ವರದಿ..
ಪುರಸಭೆಯ ಕಚೇರಿಯಲ್ಲಿ ಭಗವಾನ್ ಬುದ್ಧ ಜಯಂತಿ ಆಚರಣೆ…
ಮುದಗಲ್ಲ :- ಶುಕ್ರವಾರ ಬೆಳಗ್ಗೆ ನಡೆದ ಭಗವಾನ್ ಬುದ್ಧರ ಜಯಂತಿ ಆಚರಣೆಯಲ್ಲಿ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಸಿಬ್ಬಂದಿ ಚನ್ನಮ ದಳವಾಯಿ ಹಿರೇಮಠ ಅವರು ಪೂಜೆ ಪುಷ್ಪಾರ್ಚಾನೆ ಮಾಡಿದರು

ಈ ಸಂದರ್ಭದಲ್ಲಿ ಪುರಸಭೆ ಯ ಮಾಜಿ ಅಧ್ಯಕ್ಷರಾದ ರಜ್ಜಬ ಅಲೀ ಟಿಂಗಿ ಮಾತನಾಡಿದ ಅವರು
ಬುದ್ಧರು ಇಡೀ ಜಗತ್ತಿಗೆ ಶಾಂತಿ, ಕರುಣೆ ಹಾಗೂ ಸಹಬಾಳ್ವೆ ಸಂದೇಶ ನೀಡಿ ಜಗಕ್ಕೆ ಬೆಳಕಾದವರು. ಅವರ ವಿಚಾರಧಾರೆಗಳನ್ನು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬುದ್ಧರ ಚಿಂತನೆ ಅಗತ್ಯ ಸರ್ಕಾರ ದಿಂದ ಗೌತಮ ಬುದ್ಧರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಚಾರʼ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಮ್ಯಾನೇಜರ್ ಸುರೇಶ್ ಹೊನ್ನಾಳಿ, ಸಿಬ್ಬಂದಿಗಳಾದ ಅಂತೋಣಿ ರಾಜ್ ಜಿಲಾನಿ ಪಾಶ, ನಿಸಾರ್ ಅಹಮದ್, ಗಾಯಕರಾದ ಯಂಕಣ್ಣ ದೇಶಪಾಂಡೆ, ಇತರರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ
