BIG NEWS : ನಕಲಿ ವೋಟರ್ ಪ್ರಕರಣ : ನಗರಾಭಿವೃದ್ಧಿ ಸಚಿವನಿಗೆ ಕಾದಿದೆ ಆಪತ್ತು..!!

You are currently viewing BIG NEWS : ನಕಲಿ ವೋಟರ್ ಪ್ರಕರಣ : ನಗರಾಭಿವೃದ್ಧಿ ಸಚಿವನಿಗೆ ಕಾದಿದೆ ಆಪತ್ತು..!!

ಬೆಂಗಳೂರು : ರಾಜಧಾನಿಯಲ್ಲಿ ಮತ್ತೆ ನಕಲಿ ವೋಟರ್ ಪ್ರಕರಣ ಬೆಳಕಿಗೆ ಬಂದಿದ್ದು, ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಪತ್ತೆಯಾದಂತ ನಕಲಿ ವೋಟರ್ ಐಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಈ ಪ್ರಕರಣದ ತನಿಖೆಯನ್ನು ಚುರುಕುಗೊಳ್ಳುವುದುಕ್ಕೆ ಪೊಲೀಸರು ಈಗಾಗಲೇ ಸಚಿವ ಬೈರತಿ ಸುರೇಶ್ ಆಪ್ತನೂ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ನಕಲಿ ವೋಟರ್ ಐಡಿ ಪ್ರಕರಣ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಆಪ್ತರಾದ ಭರತ್, ಮೌನೇಶ್, ರಾಘವೇಂದ್ರ ಎಂಬುವರನ್ನು ನಕಲಿ ವೋಟರ್ ಐಟಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಈ ಮೂವರನ್ನು ವಿಚಾರಣೆಗೆ ಕರೆಸಿ, ವಿಚಾರಣೆ ನಡೆಸಿದ ಬಳಿಕ ಬಿಟ್ಟು ಕಳುಹಿಸಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪವನ್ನು ಹಲವರು ವ್ಯಕ್ತ ಪಡಿಸಿದ್ದರು.

Leave a Reply

error: Content is protected !!