LOCAL NEWS : ಡಿಸೆಂಬರ್ 10 ರಂದು ಲೀನ್ ಯೋಜನೆ, ಝಡ್.ಇ.ಡಿ., ರಫ್ತು ಕುರಿತು ಅರಿವು ಕಾರ್ಯಕ್ರಮ

You are currently viewing LOCAL NEWS : ಡಿಸೆಂಬರ್ 10 ರಂದು ಲೀನ್ ಯೋಜನೆ, ಝಡ್.ಇ.ಡಿ., ರಫ್ತು ಕುರಿತು ಅರಿವು ಕಾರ್ಯಕ್ರಮ

ಡಿಸೆಂಬರ್ 10 ರಂದು ಲೀನ್ ಯೋಜನೆ, ಝಡ್.ಇ.ಡಿ., ರಫ್ತು ಕುರಿತು ಅರಿವು ಕಾರ್ಯಕ್ರಮ

ವಿಜಯನಗರ(ಹೊಸಪೇಟೆ) : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಇವರುಗಳ ಸಹಯೋಗದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 10.30 ಕ್ಕೆ ಹೊಸಪೇಟೆಯ ಹೋಟೆಲ್ ಮಲ್ಲಿಗೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕಾಸಿಯಾ ಅಧ್ಯಕ್ಷರಾದ ಎಂ. ಜಿ. ರಾಜಗೋಪಾಲ್ ಅವರು ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸಿಇಓ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ ಹಾಗೂ ಗೌರವ ಅತಿಥಿಗಳಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಜಿ. ಹೆಚ್. ಕೋತಂಬರಿ (ಅಶ್ವಿನ್), ಕೈಗಾರಿಕಾ ವಸಾಹತು ವಾಣಿಜ್ಯೋದ್ಯಮಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಗುರುರಾಜ ದೇಶಪಾಂಡೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್ ಬಿ., ವಿಟಿಪಿಸಿ ಧಾರವಾಡ ಶಾಖಾ ಕಚೇರಿಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಮತ್ತು ಗಣೇಶ್ ರಾವ್ ಬಿ.ಆರ್., ಸುರೇಶ್ ಎನ್. ಸಾಗರ್, ಜೆ.ಎಸ್. ಬಾಬು, ಸತೀಶ್ ಎನ್, ಮಂಜುನಾಥ ಹೆಚ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

Leave a Reply

error: Content is protected !!